ಬೆಂಗಳೂರು: ರಾಜ್ಯದ ರೈತರಿಗೆ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಬೇಸಿಗೆಯ ಆರಂಭದಲ್ಲಿ ಎದುರಾಗುವ ನೀರಿನ ಅಭಾವವನ್ನು ನೀಗಿಸಲು, ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ಅಡಿಯಲ್ಲಿ ಸ್ಪ್ರಿಂಕ್ಲರ್ ಹಾಗೂ ಹನಿ ನೀರಾವರಿ ಸೆಟ್ ಪಡೆಯಲು ಭಾರಿ ಮೊತ್ತದ ಸಹಾಯಧನ ಘೋಷಿಸಲಾಗಿದೆ.
“ಪ್ರತಿ ಹನಿ ನೀರು – ಹೆಚ್ಚಿನ ಬೆಳೆ” ಎಂಬ ಮಂತ್ರದೊಂದಿಗೆ ಜಾರಿಯಾಗಿರುವ ಈ ಯೋಜನೆಯು ರೈತರಿಗೆ ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ಪಡೆಯಲು ವರದಾನವಾಗಲಿದೆ.
ರೈತರಿಗೆ ಬಂಪರ್ ಕೊಡುಗೆ: ಸ್ಪ್ರಿಂಕ್ಲರ್ ಹಾಗೂ ಹನಿ ನೀರಾವರಿ ಅಳವಡಿಕೆಗೆ ಸಿಗಲಿದೆ 90% ಸಬ್ಸಿಡಿ!
ಯಾವ ವರ್ಗದ ರೈತರಿಗೆ ಎಷ್ಟು ಸಬ್ಸಿಡಿ?
ಈ ಯೋಜನೆಯಡಿ ರೈತರ ವರ್ಗಕ್ಕೆ ಅನುಗುಣವಾಗಿ ಸಹಾಯಧನವನ್ನು ನಿಗದಿಪಡಿಸಲಾಗಿದೆ:
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC/ST): ಇವರಿಗೆ ಬರೋಬ್ಬರಿ 90% ಸಬ್ಸಿಡಿ ಸಿಗಲಿದೆ.
ಸಣ್ಣ ಮತ್ತು ಅತೀ ಸಣ್ಣ ರೈತರು: ಇವರಿಗೆ 55% ರಷ್ಟು ಸಹಾಯಧನ ಲಭ್ಯ.
ಇತರೆ ರೈತರು: ಇವರಿಗೆ 45% ರಷ್ಟು ಸಬ್ಸಿಡಿ ನೀಡಲಾಗುತ್ತದೆ. (ಗಮನಿಸಿ: ಗರಿಷ್ಠ 5 ಹೆಕ್ಟೇರ್ ಜಮೀನಿನವರೆಗೆ ಮಾತ್ರ ಈ ಸೌಲಭ್ಯ ಅನ್ವಯಿಸುತ್ತದೆ).
2025–26ನೇ ಸಾಲಿನ ಹೊಸ ಅಪ್ಡೇಟ್ ಏನು?
ತೋಟಗಾರಿಕೆ ಇಲಾಖೆಯ ಹೊಸ ನಿಯಮದಂತೆ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ:
90% ಸಬ್ಸಿಡಿ ವಿಸ್ತರಣೆ: 5 ಎಕರೆ ಒಳಗಿನ ಎಲ್ಲಾ ವರ್ಗದ ರೈತರಿಗೂ ಕೆಲವೊಂದು ಜಿಲ್ಲೆಗಳಲ್ಲಿ 90% ವರೆಗೆ ಸಬ್ಸಿಡಿ ನೀಡಲು ಚಿಂತನೆ ನಡೆಸಲಾಗಿದೆ.
ಮರು ಅರ್ಜಿ ಅವಕಾಶ: ಈ ಹಿಂದೆ ಸಬ್ಸಿಡಿ ಪಡೆದು 7 ವರ್ಷ ಪೂರೈಸಿದ ರೈತರು ಹಳೆಯ ಪೈಪ್ ಬದಲಾಯಿಸಲು ಮತ್ತೆ ಅರ್ಜಿ ಸಲ್ಲಿಸಬಹುದು.
5–12.5 ಎಕರೆ ಜಮೀನು: ಹೆಚ್ಚಿನ ಜಮೀನು ಹೊಂದಿರುವವರಿಗೆ ಹೆಚ್ಚುವರಿ ಪ್ರದೇಶಕ್ಕೆ 45% ಸಬ್ಸಿಡಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
ರೈತರು ಸ್ವಂತ ಜಮೀನು ಅಥವಾ ಮಾನ್ಯತೆ ಪಡೆದ ಗುತ್ತಿಗೆ ಪತ್ರ ಹೊಂದಿರಬೇಕು.
ಜಮೀನಿನಲ್ಲಿ ಬಾವಿ, ಬೋರ್ವೆಲ್ ಅಥವಾ ಕೆರೆಯಂತಹ ನೀರಿನ ಮೂಲ ಕಡ್ಡಾಯವಾಗಿರಬೇಕು.
ಕಳೆದ 7 ವರ್ಷಗಳಲ್ಲಿ ಇದೇ ಯೋಜನೆಯಡಿ ಲಾಭ ಪಡೆದಿರಬಾರದು.
ಅಗತ್ಯವಿರುವ ದಾಖಲೆಗಳು:
ಆಧಾರ್ ಕಾರ್ಡ್ ಪ್ರತಿ
ಜಮೀನಿನ ಪಹಣಿ (RTC)
ಬ್ಯಾಂಕ್ ಪಾಸ್ಬುಕ್ ಪ್ರತಿ
ಜಾತಿ ಪ್ರಮಾಣ ಪತ್ರ (SC/ST ರೈತರಿಗೆ ಕಡ್ಡಾಯ)
ಪಾಸ್ಪೋರ್ಟ್ ಸೈಸ್ ಫೋಟೋ
ಅರ್ಜಿ ಸಲ್ಲಿಸುವುದು ಹೇಗೆ?
ರೈತರು ತಮ್ಮ ಹತ್ತಿರದ ತಾಲೂಕಿನ ಕೃಷಿ ಅಥವಾ ತೋಟಗಾರಿಕೆ ಇಲಾಖೆಯ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಅಥವಾ ರೈತ ಸಂಪರ್ಕ ಕೇಂದ್ರದ ಮೂಲಕವೂ ಮಾಹಿತಿ ಪಡೆಯಬಹುದು. ಸರ್ಕಾರದಿಂದ ಮಾನ್ಯತೆ ಪಡೆದ (ISI ಮಾರ್ಕ್ ಹೊಂದಿರುವ) ಕಂಪನಿಗಳಿಂದ ಮಾತ್ರ ಉಪಕರಣಗಳನ್ನು ಖರೀದಿಸಬೇಕು ಎಂಬುದನ್ನು ಮರೆಯಬೇಡಿ.
: Farmer Registration :
ಈ ಪುಟಗಳನ್ನು ಓದಿ..
ನರೇಗಾ ನೌಕರರಿಗೆ ಬಿಗ್ ಶಾಕ್: 5,000ಕ್ಕೂ ಹೆಚ್ಚು ಗುತ್ತಿಗೆ ಸಿಬ್ಬಂದಿ ಕೆಲಸಕ್ಕೆ ಕುತ್ತು? ಕೇಂದ್ರ-ರಾಜ್ಯ ಸರ್ಕಾರದ ತಿಕ್ಕಾಟದಲ್ಲಿ ನೌಕರರು ಕಂಗಾಲು!
